New ration card application : ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ ! ಯಾವಾಗ ಕೊನೆಯ ದಿನಾಂಕ!
New ration card application : ನಮಸ್ಕಾರ ಸ್ನೇಹಿತರೆ ಈ ನಮ್ಮ ಮಾಧ್ಯಮದ ಹೊಸ ಲೇಖನಕ್ಕೆ ತಮಗೆ ಸ್ವಾಗತ. ಕರ್ನಾಟಕ ರಾಜ್ಯ ಆಹಾರ ಇಲಾಖೆಯು ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಪ್ರತಿ ದಿನ ಎರಡು ಗಂಟೆಗಳ ಕಾಲಾವಕಾಶ ನೀಡಿದೆ. ಇದು ಯಾವ ಸಮಯ ಮತ್ತು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ, ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ಯಾವುವು? ಅನ್ನುವ ಪ್ರತಿಯೊಂದು ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ. ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕುವರು ತಪ್ಪದೆ ಕೊನೆಯ ತನಕ ನೋಡಿ ಮಾಹಿತಿ ತಿಳಿದುಕೊಳ್ಳಿ.
ಹೌದು ಸ್ನೇಹಿತರೆ ಮೇಲೆ ಹೇಳಿದ ಹಾಗೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ, ವಿಶೇಷವಾಗಿ ವೈದ್ಯಕೀಯ ತುರ್ತು ಪರಿಸ್ಥಿತಿ ಇರುವ ಕುಟುಂಬಗಳಿಗೆ ಹೊಸ ರೇಷನ್ ಕಾರ್ಡ್ ಪಡೆಯಲು ಮೊದಲ ಆದ್ಯತೆ ನೀಡಲಾಗಿದೆ. ಇದರಿಂದ ರಾಜ್ಯದಲ್ಲಿನ ಹಲವು ಬಡ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳು ಪಡೆಯಬಹುದಾಗಿದೆ. ಈ ಅರ್ಜಿಯ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಹೊಸ ರೇಷನ್ ಕಾರ್ಡ್ ಅರ್ಜಿ (New ration card application) :
ಸ್ನೇಹಿತರೆ ನಾವು ಮೇಲೆ ತಿಳಿಸದ ಹಾಗೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವರು, ವಿಶೇಷವಾಗಿ ವೈದ್ಯಕೀಯ ತುರ್ತು ಪರಿಸ್ಥಿತಿಗೆ ರೇಷನ್ ಕಾರ್ಡ್ ಬೇಕಾದವರು ಅರ್ಜಿ ಹಾಕಿ ಹೊಸ ರೇಷನ್ ಕಾರ್ಡ್ ಪಡೆಯಲು ಸರ್ಕಾರದಿಂದ ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ತಪ್ಪದೆ ಉಪಯೋಗಿಸಿಕೊಳ್ಳಿ. ಅರ್ಜಿ ಹಾಕಲು ಬೇಕಾದ ಅರ್ಹತೆ, ಅರ್ಜಿಯ ಪ್ರತಿಯೊಂದು ಮಾಹಿತಿ ಇಲ್ಲಿ ತಿಳಿಯಿರಿ.
ಹೊಸ ರೇಷನ್ ಕಾರ್ಡ್ ಪಡೆಯುವುದರಿಂದ ಕೇವಲ ಗುರುತಿನ ಪತ್ರ ಪಡೆಯುವುದು ಅಷ್ಟೇ ಅಲ್ಲ, ಸರ್ಕಾರದ ಮೂಲಕ ಆಹಾರದ ಭದ್ರತೆ ಪಡೆಯಬಹುದು, ಸರ್ಕಾರದ ಪ್ರತಿಯೊಂದು ಯೋಜನೆಗಳ ಲಾಭ ಪಡೆಯಬಹುದು, ನಮ್ಮ ಕರ್ನಾಟಕದಲ್ಲಿನ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಬಹುದು.
ಯಾರಿಗೆ ಅರ್ಜಿ ಹಾಕಲು ಅವಕಾಶ ?
- ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರು.
- ಹೊಸದಾಗಿ ಮದುವೆಯಾದ ನವ ದಂಪತಿಗಳಿಗೆ ಅವಕಾಶ.
- ವೈದ್ಯಕೀಯ ತುರ್ತು ಪರಿಸ್ಥಿತಿ ಸಲುವಾಗಿ (ಮೊದಲ ಆದ್ಯತೆ).
ಬೇಕಾಗುವ ದಾಖಲೆಗಳು :
- ಸದಸ್ಯರ ಆಧಾರ್ ಕಾರ್ಡ್
- ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ವೋಟರ್ ಐಡಿ
- ಪಾಸ್ಪೋರ್ಟ್ ಗಾತ್ರದ ಫೋಟೋಗಳು
- ವೈದ್ಯಕೀಯ ತುರ್ತು ಪರಿಸ್ಥಿತಿ ಪ್ರಮಾಣ
ಹೊಸ ರೇಷನ್ ಕಾರ್ಸ್ ಗೆ ಅರ್ಜಿ ಹಾಕುವುದು ಹೇಗೆ?
ಸ್ನೇಹಿತರೆ ನಿಮಗೆ ಮೇಲೆ ತಿಳಿಸಿರುವ ಹಾಗೆ ತುರ್ತು ಪರಿಸ್ಥಿತಿಗೆ ರೇಷನ್ ಕಾರ್ಡ್ ಬೇಕಾದಲ್ಲಿ, ಮೇಲಿನ ಅರ್ಹತೆಗಳನ್ನು ಹೊಂದಿದ್ದರೆ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಬಹುದು.
ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ನಿಮ್ಮ ಹತ್ತಿರದ ಯಾವುದಾದರೂ ಗ್ರಾಮ ಒನ್, CSC ಸೆಂಟರ್ ಅಥವಾ ಕರ್ಣಾಟಕ ಒನ್ ಗೆ ಭೇಟಿ ನೀಡಿ ಎಲ್ಲಾ ದಾಖಲೆಗಳನ್ನು ನೀಡಿ ಅರ್ಜಿ ಹಾಕಬಹುದು.
ಸೂಚನೆ : ಸ್ನೇಹಿತರೆ ಕೇವಲ ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ರೇಷನ್ ನೀಡಲಾಗುತ್ತದೆ. ಆದ ಕಾರಣ ತುರ್ತು ಪರಿಸ್ಥಿತಿ ಇದ್ದವರು ಮಾತ್ರ ಅರ್ಜಿ ಹಾಕಿ. ಇಲ್ಲಿಯ ತನಕ ಲೇಖನ ಓದಿದ ತಮಗೆ ಧನ್ಯವಾದಗಳು.